ಶ್ರೀ ವಿಷ್ಣುಮೂರ್ತಿ ಭೂತಾರಾಧನೆ l ಮಲ್ಲಮೂಲೆ ತರವಾಡು ಬ್ರಹ್ಮಕಲಶೋತ್ಸವ ನೃತ್ಯ ನೇಮೋತ್ಸವ fox24live
Автор: Fox24 Live News Kerala
Загружено: 2023-03-02
Просмотров: 4975
#sharathpanikar l vishnumoorthi ತುಳುನಾಡಿನ ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗ ಭೂತಾರಾಧನೆ.ತುಳುವರು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಭೂತಾರಾಧನೆಯನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ಭೂತಾರಾಧನೆಯಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಅನೇಕ ವಿಧಗಳಿವೆ. ಆ ಎಲ್ಲಾ ವಿಧಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ.
ಈ ಎಲ್ಲಾ ಆಚರಣೆಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡು ಬರುವಂತಹ ಆಚರಣೆ ಒತ್ತೆ ಕೋಲ. ಸಾಮನ್ಯವಾಗಿ ತುಳುನಾಡಿನಲ್ಲೆಲ್ಲಾ ನಡೆಯುವ ಭೂತಾರಾಧನೆಗಳಂತಲ್ಲದೆ, ಈ ಒತ್ತೆ ಕೋಲ ಎಲ್ಲೆಡೆಯೂ ಕಂಡು ಬರುವುದಿಲ್ಲ. ಕೆಲವೇ ಕೆಲವು ಕಡೆಗಳಲ್ಲಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನ ಪ್ರದೇಶಗಳಲ್ಲಿ ಈ ಒತ್ತೆಕೋಲದ ಪ್ರಭಾವವನ್ನು ಹೆಚ್ಚು ಕಾಣಬಹುದು. ಈ ಅಚರಣೆಯನ್ನು ಮಂಗಳೂರಿಗಿಂತ ಹೆಚ್ಚಾಗಿ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಕಾಣಬಹುದು. ಇದನ್ನು ಕೇರಳಿಗರು ವಿಷ್ಣುಮೂರ್ತಿ ತೆಯ್ಯಂ ಎಂದು ಕರೆದರೆ ತುಳುವರು ಒತ್ತೆ ಕೋಲ ಎಂದು ಕರೆಯುತ್ತಾರೆ. ಕೇರಳದಲ್ಲಿ ಪ್ರಸಿದ್ದವಾಗಿರುವ ಆಚರಣೆಯಾದರೂ ಕರ್ನಾಟಕದಲ್ಲಿ ಇದರ ಪ್ರಭಾವ ಕಮ್ಮಿಯೇನಿಲ್ಲ. ಬೆಳಗಿನ ಜಾವದಲ್ಲಿ ನಡೆಯುವ ವಿಷ್ಣುಮೂರ್ತಿ ಕೆಂಡಸೇವೆ ಈ ಆಚರಣೆಯ ಪ್ರಮುಖ ಆಕರ್ಷಣೆ. ಕೆಂಡಸೇವೆ ಹಾಗೂ ಇದರ ಹಿಂದಿರುವ ಇತಿಹಾಸ ಒತ್ತೆ ಕೋಲವನ್ನು ಇತರ ಆಚರಣೆಗಳಿಗಿಂತ ಭಿನ್ನವಾಗಿರಿಸುತ್ತವೆ.[೧]
ಒತ್ತೆಕೋಲವನ್ನು ತುಳುನಾಡಿನ ಇತರ ಆರಾಧನೆಗಳಿಗಿಂತ ಭಿನ್ನವಾಗಿಸುವ ಇನ್ನೊಂದು ಮುಖ್ಯ ಅಂಶವಿದೆ. ಭೂತಾರಾಧನೆಗಳಲ್ಲಿ ಆರಾಧಿಸಲ್ಪಡುವ ದೈವಗಳಲ್ಲಿ ಅವುಗಳದ್ದೇ ಆದ ಪ್ರಬೇಧಗಳಿವೆ. ಹಿಂದೆ ತುಳುನಾಡಿನಲ್ಲೇ ನಲೆಸಿ ವಿವಿಧ ಕಾರಣಗಳಿಂದ ವೀರ ಮರಣವನ್ನು ಪಡೆದ ಕೆಲವು ವ್ಯಕ್ತಿಗಳಿಗೆ ತುಳುವರು ದೈವದ ಪಟ್ಟವನ್ನು ನೀಡಿದ್ದರೆ, ಇನ್ನೂ ಕೆಲವು ದೈವಗಳು ದೇವರ ಅಪ್ಪಣೆಯನ್ನು ಪಡೆದು ಭೂಲೋಕದಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಲು ಬಂದವಾಗಿವೆ. ಕನ್ನಡ ನಾಡಿನಿಂದ ಇಳಿದು ಬಂದು ತುಳುನಾಡಿನಲ್ಲೇ ನೆಲೆಸಿ ಕಾರಣಿಕವನ್ನು ತೋರಿದ ಕೆಲವು ಕನ್ನಡಿಗರಿಗೂ ತುಳುವರು ದೈವತ್ವವನ್ನು ನೀಡಿ ಆರಾಧಿಸುತ್ತಾ ಬಂದಿದ್ದಾರೆ. ಈ ಎಲ್ಲಾ ದೈವಗಳಿಗೂ ಕಾಲಕಾಲಕ್ಕೆ ತಕ್ಕಂತೆ ನೇಮ, ಕೋಲ, ಒಲಸರಿ, ಮೆಚ್ಚಿಗಳನ್ನು ತುಳುವರು ನಡೆಸಿಕೊಂಡು ಬಂದಿದ್ದಾರೆ. ಈ ಎಲ್ಲಾ ಕೋಲಗಳಲ್ಲಿ ಒತ್ತೆ ಕೋಲ ವಿಭಿನ್ನವಾಗಿ ನಿಲ್ಲುವುದು ಅದರಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿಯಿಂದಾಗಿ. ದೇವರನ್ನು ದೈವವಾಗಿ ತುಳುವರು ಆರಾಧಿಸುವುದು ಈ ಒತ್ತೆ ಕೋಲಗಳಲ್ಲಿ ಮಾತ್ರ. ಬೇರೆ ಯಾವುದೇ ಕೋಲಗಳಲ್ಲಿ ತ್ರಿಮೂರ್ತಿಗಳನ್ನು ಆರಾಧಿಸಲಾಗುವುದಿಲ್ಲ.
ಇತಿಹಾಸ
ಈ ಆಚರಣೆಯ ಹಿಂದೆ ಒಂದು ಕಥೆಯಿದೆ.ಕೇರಳದ ಮಲಬಾರಿನಲ್ಲಿ ಪ್ರಸಿದ್ದವಾಗಿರುವ ಈ ಆಚರಣೆಯ ಇತಿಹಾಸದ ಕಥೆಯ ಬೇರುಗಳು ಕರ್ನಾಟಕದ ಮಂಗಳೂರಿಗೂ ಹಬ್ಬಿವೆ. ಲಭ್ಯವಿರುವ ಕಥೆಗಳ ಪ್ರಕಾರ ಈ ಆಚರಣೆಯ ಇತಿಹಾಸದ ಮೂಲವಿರುವುದು 'ಕೊಟ್ಟಪ್ಪುರಂ' ಎಂಬ ಒಂದು ಪ್ರಾಚೀನ ತರವಾಡಿನಲ್ಲಿ. ಈ ತರವಾಡಿನ ಮೂಲವಿದ್ದುದು ಕಾಸರಗೋಡಿನ ಸಮೀಪದ ನೀಲೇಶ್ವರದಲ್ಲಿ. ಇಂದಿಗೂ ಅದೇ ಹೆಸರಿರುವ ಈ ಊರಿನಲ್ಲಿ ತುಳುವರು ಹೆಚ್ಚಾಗಿ ನೆಲೆಸಿದ್ದಾರೆ.
ಅಂದಿನ ದಿನಗಳಲ್ಲಿ ಈ ತರವಾಡಿನ ಮುಖ್ಯಸ್ಥನಾಗಿದ್ದುದು ಕುರುವಟ್ಟ್ ಕುರುಪ್. ಆವನ ಮನೆಯಲ್ಲಿ ಕಣ್ಣನ್ ಎಂಬ ಹುಡುಗ ಸೇವಕನಾಗಿದ್ದ(ಅವನನ್ನು ಪಳಂತಯಿ ಕಣ್ಣನ್ ಎಂದೂ ಕರೆಯುತ್ತಾರೆ). ಮಹಾನ್ ವಿಷ್ಣು ಭಕ್ತನಾಗಿದ್ದ ಆತ ಒಂದು ದಿನ ಕುರುವಟ್ಟ್ ಕುರುಪ್ಪನ ಮಗಳೊಂದಿಗೆ ಆಟವಾಡುತ್ತಿದ್ದಾಗ ಅವನಿಂದಾಗಿ ಒಂದು ಮಾವಿನ ಹಣ್ಣು ಕುರುಪ್ಪನ ಮಗಳ ತಲೆಯ ಮೇಲೆ ಬಿತ್ತು. ಆಕಸ್ಮಿಕವಾಗಿ ಈ ಘಟನೆ ನಡೆದಿದ್ದರೂ ಕೆಲವು ಕುತಂತ್ರಿಗಳ ಕಾರಣದಿಂದಾಗಿ ಹಾಗೂ ಹಿಂದಿನ ಕೆಲವು ಘಟನೆಗಳಿಂದಾಗಿ ತನ್ನ ಮಗಳ ಜೀವಕ್ಕೆ ಅವನಿಂದ ಬೆದರಿಕೆಯಿದೆಯೆಂದು ತಿಳಿದು ಕುರುವಟ್ಟ್ ಬಾಲಕನ ಜೀವ ತೆಗೆಯುವಂತೆ ತನ್ನ ಅನುಚರರಿಗೆ ಆದೇಶಿಸುತ್ತಾನೆ. ಇದು ಒಂದು ಕಥೆಯಾದರೆ ಇನ್ನೂ ಕೆಲವರ ಪ್ರಕಾರ,ಕಣ್ಣನ್ ಕುರುಪ್ಪನ ತೋಟದಿಂದ ಮಾವಿನ ಹಣ್ಣನ್ನು ಕೀಳುವಾಗ ಸಿಕ್ಕಿ ಬೀಳುತ್ತಾನೆ. ಆದರಿಂದ ರೊಚ್ಚಿಗೇಳುವ ಕುರುಪ್ ತನ್ನ ಸಹಚರರಿಗೆ ಆತನನ್ನು ಕೊಲ್ಲುವಂತೆ ಆದೇಶಿಸುತ್ತಾನೆ. ಎರಡು ಕಥೆಗಳು ಭಿನ್ನವಾಗಿದ್ದರೂ ಕುರುಪ್ ಹಿಂದಿನ ದ್ವೇಷದಿಂದ ಹುಡುಗನನ್ನು ಕೊಲ್ಲಲು ಆದೇಶಿಸುವುದು ಮಾತ್ರ ಎರಡೂ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.
ಇದರ ಸುಳಿವನ್ನು ಅರಿತ ಕೆಲವು ಹಿತೈಷಿಗಳು ಕಣ್ಣನ್ ನೀಲೇಶ್ವರ ಬಿಟ್ಟು ಬೇರೆ ಊರಿಗೆ ಹೋಗುವುದು ಕ್ಷೇಮವೆಂದು ಸಲಹೆಯನ್ನು ನೀಡುತ್ತಾರೆ.ಅದರಂತೆ ಕಣ್ಣನ್ ನೀಲೇಶ್ವರವನ್ನು ಬಿಟ್ಟು ಮಂಗಳೂರಿನ ಜೆಪ್ಪು ಎಂಬ ಊರಿಗೆ ಬರುತ್ತಾನೆ. ಅಲ್ಲಿ ಆತ ಒಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಗಿದ್ದ ಎಂದು ಒಂದು ಕಥೆ ಹೇಳಿದರೆ, ದೇವಿ ಭಕ್ತೆಯಾದ ಒಬ್ಬಳು ಮುದುಕಿಯ ಮನೆಯಲ್ಲಿ ವಾಸವಾಗಿದ್ದ ಎಂದು ಇನ್ನೊಂದು ಕಥೆ ಹೇಳುತ್ತದೆ. ಒಟ್ಟಿನಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿ ಆತ ಇದ್ದ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಬಹಳ ವರ್ಷಗಳ ಕಾಲ ಅಲ್ಲಿಯೇ ತಂಗಿದ್ದ ಕಣ್ಣನ್ ಕೊನೆಗೊಂದು ದಿನ ತನ್ನವರನ್ನು ನೋಡುವ ಕಾತರತೆಯಿಂದ ಪುನಃ ನೀಲೇಶ್ವರಕ್ಕೆ ಬರುತ್ತಾನೆ.
ಕಣ್ಣನ್ ನೀಲೇಶ್ವರಕ್ಕೆ ಬಂದದ್ದನ್ನು ತಿಳಿದುಕೊಳ್ಳುವ ಕುರುಪ್ ಹಿಂದಿನ ದ್ವೇಷವನ್ನು ಹಾಗೂ ಸೋಲನ್ನು ನೆನಪಿಸಿಕೊಂಡು ತನ್ನ ಅನುಚರರೊಂದಿಗೆ ಹೊರಡುತ್ತಾನೆ. ಇದರ ಅರಿವಿಲ್ಲದ ಕಣ್ಣನ್ ಕಡಳಿ ಕೊಳಂನಲ್ಲಿ ಸ್ನಾನ ಮಾಡುತ್ತಿರುತ್ತಾನೆ(ಈ ಕೊಳ ಈಗ ನೀಲೇಶ್ವರದ ಸಂತೆಯ ಸಮೀಪದಲ್ಲಿದೆ). ಅಲ್ಲಿಗೆ ಬರುವ ಕಣ್ಣನ್ ತನ್ನ ಅನುಚರರೊಂದಿಗೆ ಕೂಡಿಕೊಂಡು ಅವನ ಕೊಲೆ ಮಾಡುತ್ತಾನೆ. ತನ್ನ ಭಕ್ತನ ಕೊಲೆ ನಡೆದುದನ್ನು ಕಂಡ ವಿಷ್ಣುಮೂರ್ತಿ ತನ್ನ ರೌದ್ರ ರೂಪವಾದ ನರಸಿಂಹ ರೂಪವನ್ನು ತಾಳಿ ಕುರುಪ್ಪನ ಬೆನ್ನ ಹಿಂದೆ ಬೀಳುತ್ತಾನೆ.
ಇದರಿಂದಾಗಿ ಕುರುಪ್ಪನ ಸಂಸಾರದಲ್ಲಿ ಅನೇಕ ಕಷ್ಟಗಳು ಕಾಣಿಸಿಕೊಳ್ಳುತ್ತವೆ. ಆತನ ಕುಟುಂಬಸ್ಥರಿಗೆ ಮಾನಸಿಕ ವ್ಯಾಧಿ ಶುರುವಾಗಿ ಆತ ತನ್ನೆಲ್ಲಾ ಗಳಿಕೆಯನ್ನೂ ಕಳೆದುಕೊಳ್ಳುತ್ತಾನೆ. ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತನಾಗುವ ಆತ ಜ್ಯೋತಿಷಿಗಳನ್ನು ಸಂರ್ಕಿಸಿದಾಗ ವಿಷ್ಣುಮೂರ್ತಿ ನರಸಿಂಹ ರೂಪದಲ್ಲಿ ಹಿಂದೆ ಬಿದ್ದಿರುವುದು ಗೊತ್ತಾಗುತ್ತದೆ. ಇದಕ್ಕೆ ಪರಿಹಾರವೇನೆಂದು ವಿಚಾರಿಸಲಾಗಿ ವಿಷ್ಣುಮೂರ್ತಿ ಶಾಂತವಾಗಲು ನರಸಿಂಹ ದೇವರ ಒಂದು ಗುಡಿ ಕಟ್ಟಿಸುವಂತೆ ಹಾಗೂ ದೇವರಿಗೆ ಕೆಂಡಸೇವೆಯನ್ನು ಕೊಡುವಂತೆ ಸಲಹೆಯನ್ನು ಜ್ಯೋತಿಷಿಗಳು ನೀಡುತ್ತಾರೆ. ಅದರಂತೆ ಕುರುಪ್ಪನು ನಡೆದುಕೊಳ್ಳುತ್ತಾನೆ.ಹೀಗೆ ಒತ್ತೆ ಕೋಲ ಅಥವಾ ಕೆಟ್ಟಿ ಕೋಲ ಪ್ರಾರಂಭವಾಗುತ್ತದೆ. ಜ್ಯೋತಿಷಿಗಳ ಸಲಹೆಯಂತೆ ನೀಲೇಶ್ವರದ ಕೊಟ್ಟಪುರಂನಲ್ಲಿ ವೈಕುಂಡೇಶ್ವರ ದೇವಾಲಯವನ್ನು ನಿರ್ಮಿಸಲಾಗುತ್ತದೆ. ಶಾಂತನಾದ ವಿಷ್ಣುಮೂರ್ತಿ ಅಲ್ಲೇ ನೆಲಸಿದನೆಂದು ಪ್ರತೀತಿ.
Доступные форматы для скачивания:
Скачать видео mp4
-
Информация по загрузке: