ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರಿಂದ ಕಾಡಾ ಕಚೇರಿ ಮುತ್ತಿಗೆ ಯತ್ನ...ಸರ್ಕಾರದ ವಿರುದ್ದ ತೀವ್ರ ಆಕ್ರೋಷ...
Автор: TV10 Kannada / ಟಿವಿ10 ಕನ್ನಡ
Загружено: 2025-03-11
Просмотров: 41
ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರಿಂದ ಕಾಡಾ ಕಚೇರಿ ಮುತ್ತಿಗೆ ಯತ್ನ...ಸರ್ಕಾರದ ವಿರುದ್ದ ತೀವ್ರ ಆಕ್ರೋಷ...
ಮೈಸೂರು,ಮಾ11,Tv10 ಕನ್ನಡ
ಕಬಿನಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ನೀರು ಬಿಟ್ಟು ಕೆರೆ ಕಟ್ಟೆ ತುಂಬಿಸುವಂತೆ ಆಗ್ರಹಿಸಿ
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ರೈತರು
ಮೈಸೂರಿನ ಕಾಡ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರವೇಶ ದ್ವಾರದ ಬಳಿ ಪೋಲಿಸರು ತಡೆದರು.ಈ ವೇಳೆ
ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು.
ಕಚೇರಿ ಒಳಗೆ ಪ್ರವೇಶಿಸಲು ಪೋಲಿಸರು ಅವಕಾಶ ನೀಡಲಿಲ್ಲ.ಬೇಡಿಕೆಗಳನ್ನ ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಕಬ್ಬು ಬೆಳಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹತ್ತಳ್ಳಿ ದೇವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಹಲವಾರು ರೈತರು ಭಾಗಿಯಾಗಿದ್ದರು...
Доступные форматы для скачивания:
Скачать видео mp4
-
Информация по загрузке: